ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Monday 21 June 2010

ಕನ್ನಡದ ತೇಜಸ್ಸು: ಪೂರ್ಣಚಂದ್ರ ತೇಜಸ್ವಿ

ಅದೇ ಮೊದಲ ಬಾರಿಗೆ ಪ್ಯಾಂಟಿನಿಂದ ಮುಚ್ಚಿದ್ದ ಮೊಣಕಾಲು, ಚಪ್ಪಲಿ ಕಂಡ ಕಾಲು, ತಲೆಯ ಹರಳೆಣ್ಣೆ ವಾಸನೆಯೊಂದಿಗೆ ಸೈಕಲ್ ತುಳಿದುಕೊಂಡು ಕಾಲೇಜು ಮೆಟ್ಟಿಲು ಹತ್ತಿದಾಗ, ಪಟ್ಟಣದ ಹುಡುಗರು ಹಳ್ಳಿ ಮುಕ್ಕನನ್ನು ನಿರ್ಲಕ್ಷ್ಯದಲ್ಲಿ ಇರಿಯುವಂತೆ ನೋಡುತ್ತಿದ್ದರೆ, ಓದಿ ಏನೋ ಆಗುವುದು ಹಾಗಿರಲಿ ಪ್ರತಿದಿನ ಇಂಥ ತಿರಸ್ಕಾರಗಳ ನಡುವೆ ಕಲಿಯಬೇಕಲ್ಲ ಎಂಬ ಭಯ ಸುತ್ತವವರಿದಿದ್ದಾಗ, ತಲೆ ಎತ್ತಿ ಕೂರಲಿಕ್ಕೆ ಕನ್ನಡದ ಪೀರಿಯಡ್ ಬರಬೇಕಿತ್ತು.   
ಕನ್ನಡದ ಮೇಷ್ಟ್ರು ತನ್ಮಯತೆಯಿಂದ ಹೇಳುತ್ತಿದ್ದ  ಕರ್ವಾಲೋ ಕಾದಂಬರಿಯ ವಿವರಗಳು ಕೊಡುತ್ತಿದ್ದ ಎಂಥದೋ ಬಲ, ಹುಮ್ಮುಸ್ಸು, ಆತ್ಮವಿಶ್ವಾಸ ಕರ್ವಾಲೋ, ಕನ್ನಡ ಮತ್ತು ತೇಜಸ್ವಿ ಮತ್ತೆ ಮತ್ತೆ ಬೇಕು ಅನಿಸುತ್ತಿತ್ತು. ಇದು ತೇಜಸ್ವಿ ಬರಹದ ತಾಕತ್ತು. ತೇಜಸ್ವಿಯನ್ನು ನೆನಪಿಸಿಕೊಂಡಾಗಲೆಲ್ಲ ಕನ್ನಡದಿಂದಲೇ ಎಲ್ಲರನ್ನೂ ಎದುರಿಸಬಹುದು, ಮಣಿಸಬಹುದು ಎಂಬ ಬಿಗುಮಾನ  ಉಂಟಾಗುತ್ತಿತ್ತು. ಅವರ ಬರವಣಿಗೆಗಳೆಂದರೆ ನಮ್ಮ ಬದುಕಿನ ಕನ್ನಡಿ. ಕನ್ನಡ ಮಾದ್ಯಮ, ಕನ್ನಡತನದ ಬಗೆಗಿನ ಚರ್ಚೆಗಳು, ಮೈಕ್ರೋಸಾಫ್ಟ್  ಒಡೆತನದ ತಂತ್ರeನ ಕನ್ನಡದಂಥ ದೇಶೀಯ ಭಾಷೆಗಳಿಗೆ ಒಡ್ಡಿರುವ ಆತಂಕ. ಕನ್ನಡವನ್ನು ಬೆಳೆಸಬೇಕಾದ ದಾರಿ ಯಾವುದು ಎಂಬಂಥ ಚರ್ಚೆಗಳು ಮುಗಿಲು ಮುಟ್ಟಿರುವ ಈ ಸಂದರ್ಭದಲ್ಲಿ ತೇಜಸ್ವಿ ದಾರಿದೀಪದಂತೆ ಕಾಣುತ್ತಾರೆ. 

ವಿeನವಿರಲಿ, ಕತೆ ಇರಲಿ, ಕಾದಂಬರಿ ಇರಲಿ, ಕೊನೆಗೆ ಪ್ರವಾಸ ಕಥನ ಇರಲಿ ಎಲ್ಲವನ್ನೂ ವಿಶಿಷ್ಟವಾಗಿ, ಸಹಜವಾಗಿ ಬರೆದಿದ್ದು, ತೇಜಸ್ವಿಯವರು, ವಿeನದ ಆನೇಕ ವಿಷಯಗಳ ಬಗ್ಗೆ ದಿನಪತ್ರಿಕೆಗಳಲ್ಲಿ ಕೆಲವೇ ಕೆಲವರು ಬರೆಯುತ್ತಿದ್ದ ಸಂದರ್ಭದಲ್ಲಿ ಅದನ್ನು ಅತ್ಯಂತ ಸರಳವಾಗಿಯೂ ಪರಿಣಾಮಕಾರಿಯಾಗಿಯೂ ಬಿಡಿಸಿಟ್ಟವರು ಅವರು. ನಿಗೂಢತೆ. ರೋಚಕತೆ, ಹಾಸ್ಯ ಮತ್ತು ಜೀವನಾನುಭವದ ಹದವಾದ ಪಾಕ ಅವರ ಬರವಣಿಗೆಗಳು. ‘ಮಿಲೇನಿಯಮ್ ಸೀರೀಸ್’ ಪುಸ್ತಕಗಳನ್ನು ಬದುಕಿಗೆ ಅಗತ್ಯವಾದ ವಿವರಗಳೊಂದಿಗೆ ಕನ್ನಡಕ್ಕೆ ತಂದು ಇಂಗ್ಲಿಷ್ ಪ್ರವಾಹದೆದುರು ಕನ್ನಡತನವನ್ನು ಎದೆಗೇರಿಸಿ ನಿಂತವರು ತೇಜಸ್ವಿ. ಒಂದು ವಿಧದಲ್ಲಿ ಅವರ ಬದುಕೇ ಜಾಗತೀಕರಣ, ಆಂಗ್ಲೀಕರಣ ಮತ್ತು ನಗರೀಕರಣವನ್ನು ಕ್ಕರಿಸುವಂತೆ ಇತ್ತು. ಎಲ್ಲಾ  eನದೊಂದಿಗೆ, ಯುವಕರೇ ಹಳ್ಳಿಗಳಿಗೆ ತೆರಳಿ ಎಂಬ ಗಾಂಯ ಮಾತಿಗೆ ಉದಾಹರಣೆಯಂತಿದ್ದರು.   

ಮೀನು ಹಿಡಿಯುವುದು, ಬೇಟೆ ಆಡುವುದನ್ನೂ ಅತ್ಯಂತ ಕಲಾತ್ಮಕವಾಗಿ ಹೇಳಿ ಮೈಮರೆಸುವ ಶಕ್ತಿ ಅವರಿಗಿತ್ತು. ಸ್ವತಃ ಇದೆಲ್ಲ ಅನುಭವಗಳನ್ನು ಅನುಭವಿಸಿದವರೂ ಚಕಿತಗೊಳ್ಳುವಂತೆ ಬರೆಯುತ್ತಿದ್ದರು. ಯಾವುದೋ ಪಕ್ಷಿಯ ಕೂಗು, ಇನ್ನಾವುದೋ ಪ್ರಾಣಿಯ ಜೀವನಕ್ರಮ, ಕೊನೆಗೆ ತನ್ನ ಸುತ್ತಲಿನ ಜಗತ್ತಿನ ಹಳವಂಡಗಳನ್ನೆಲ್ಲಾ ಮುಂದಕ್ಕೆ ಸುರಿದುಕೊಂಡು ಆಡುತ್ತಿದ್ದ ತುಂಟ ಮಗುವಿನಂತಿದ್ದರು ತೇಜಸ್ವಿ. ವೃಥಾ ಭಾವುಕರಾಗದೆ, ಅವಸರಕ್ಕೆ ಮಾತಾಡದೆ, ವಾಸ್ತವ ಹೇಳಲು ಯಾವ ಅeನವನ್ನು ಬೇಕಾದರೂ ಪ್ರಶ್ನಿಸುತ್ತಿದ್ದ ತೇಜಸ್ವಿ, ನಮ್ಮ ನಡುವೆ ಬದುಕಿನ ಅತ್ಯಂತ ಸಹಜ ಮನುಷ್ಯ ಅನಿಸುತ್ತದೆ.   ಕನ್ನಡದ ಬೆಳವಣಿಗೆ, ಭಾಷೆಯಾಗಿ ನೋಡುವ ಕ್ರಮ, ಶಾಸ್ತ್ರೀಯತೆಗಾಗಿನ ಹೋರಾಟ ಕುರಿತ ತೇಜಸ್ವಿ, ಅವರ ಅನಿಸಿಕೆಗಳು ಅತ್ಯಂತ ಖಚಿತವಾಗಿದ್ದವು. 

ಕನ್ನಡವು ತಂತ್ರeನವನ್ನು ದಕ್ಕಿಸಿಕೊಳ್ಳುವುದು ಅಗತ್ಯವೆಂದು ನಂಬಿದ್ದ ಅವರು, ದೂರದೃಷ್ಟಿಯಿಂದ ಆ ನಿಟ್ಟಿನಲ್ಲಿ ಹೆಜ್ಜೆಯನ್ನೂ ಇಟ್ಟರು. ಕನ್ನಡ ಅನ್ನ ಕೊಡುವ ಭಾಷೆ ಎಂಬ ಭರವಸೆಯನ್ನು ಹುಟ್ಟಿಸುವ ಕೆಲಸ ಅತ್ಯಂತ ಅಗತ್ಯವಾಗಿ ಮತ್ತು ತುರ್ತಾಗಿ ಆಗಬೇಕಿರುವ ಕೆಲಸ ಎಂದು ಹೇಳಿದವರಲ್ಲಿ ತೇಜಸ್ವಿ ಮೊದಲಿಗರು. ಸಮಾಜವಾದದಿಂದ ಸೂರ್ತಿ ಪಡೆದಿದ್ದ ಅವರು ತಮ್ಮ ಜತೆಗಾರರಂತೆ ಅಲ್ಲೇ ನಿಂತವರಲ್ಲ, ನಿರಂತರವಾಗಿ ಹೊಸ ದಿಗಂತಗಳನ್ನು ಆವಿಷ್ಕರಿಸುತ್ತ ಇದ್ದವರು. 

೨೪ ನವೆಂಬರ್ ೨೦೦೭ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

1 comment:

  1. ಬ್ಲಾಗ್ ಲೋಕಕ್ಕೆ ಹೊಸ ಸೇರ್ಪಡೆಯಾದ "ಅನುಕ್ಷಣ"ವೂ ಹೊಸ ಹೊಸ ಲೇಖನಗಳನ್ನು ಹೊತ್ತು ತರಲಿ....ಪೂರ್ಣ ಚಂದ್ರ ತೇಜಸ್ವಿ ಕುರಿತ ಲೇಖನ ಚನ್ನಾಗಿದೆ...

    ReplyDelete