ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Monday 24 March 2014

ಇ ರಾಘವನ್ ಅವರ ಎರಡನೇ ಪುಣ್ಯ ತಿಥಿ

ಆತ್ಮೀಯರೇ,
ವಿಜಯಕರ್ನಾಟಕ ದಿನಪತ್ರಿಕೆಯ ಹಿಂದಿನ ಸಂಪಾದಕರಾಗಿದ್ದ . ರಾಘವನ್ ಅವರು ತೀರಿಕೊಂಡು ಇಂದಿಗೆ ಎರಡು ವರ್ಷಗಳು ತುಂಬಿದವು. ಅವರ ಜತೆಗಿನ ನೆನಪುಗಳನ್ನು ನಮ್ಮ ಅನೇಕ ಸಹೋದ್ಯೋಗಿಗಳು ಹಂಚಿಕೊಂಡಿರುವ ಪುಸ್ತಕವೊಂದು ಸಿದ್ಧವಾಗುತ್ತಿದೆ. ಚುನಾವಣೆಯ ಕಾವು ಇಲ್ಲದಿದ್ದರೆ ಪುಸ್ತಕ ಇಂದೇ ಬಿಡುಗಡೆಯಾಗಬೇಕಿತ್ತು. ಚುನಾವಣೆಯ ಈ ಭರಾಟೆ ಮುಗಿದ ನಂತರ ಮುಂದಿನ ತಿಂಗಳು ಪುಸ್ತಕವನ್ನು ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೇವೆ.
ನನ್ನ ಗೆಳೆಯ ಜೇಪಿ ಮತ್ತು ನಾನು ಸಂಪಾದಿಸಿರುವ ಈ ಪುಸ್ತಕಕ್ಕೆ ಗೆಳೆಯ, ಕಲಾವಿದ ಬಡಿಗೇರ್‌ ಮುಖಪುಟ ರಚಿಸಿದ್ದಾರೆ. ನಿಮ್ಮ ಅನಿಸಿಕೆ ತಿಳಿಸಿ.

ಧನ್ಯವಾದಗಳು
ಕರಿಸ್ವಾಮಿ. ಕೆ


No comments:

Post a Comment